Study

೪ನೇ ತರಗತಿ

  •   0%
  •  0     0     0

  • ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ?
    ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ
  • ಉಳುಮೆಯ ಬಗ್ಗೆ ಗುರುಗಳು ನೀಡಿದ ವಿವರಣೆ ಏನು?
    ಉಳುಮೆಯ ಬಗ್ಗೆ ಗುರುಗಳು ’ಹಿಂದೆ ನೇಗಿಲು ನೊಗ, ಎತ್ತು ಮತ್ತು ಕೋಣ ಬಳಸಿ ಹೊಲ ಉಳುತ್ತಿದ್ದರು. ಈಗ ಹೊಸ ಹೊಸ ಸಾಧನಗಳು ಬಂದಿವೆ ಎಂದು ವಿವರಣೆ ನೀಡಿದರು.
  • ಚರ್ಚಿಸು ಈ ಪದದ ಅರ್ಥ
    ವಾದ ಮಾಡು, ಚರ್ಚೆಮಾಡು
  • ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ?
    ಎರೆಗೊಬ್ಬರವನ್ನು ಎರೆಹುಳುವಿನ ಸಹಾಯದಿಂದ ತಯಾರಿಸುತ್ತಾರೆ
  • ರಾಗಿಯು ಹೇಗೆ ಉದುರುತ್ತದೆ?
    ರಾಗಿಯು ಜಲ್ಲಜಲ್ಲಾನೆ ಉದುರುತ್ತದೆ
  • ಭಾರ್ಗವಿ ಅದ್ಭುತವಾಗಿ ನೃತ್ಯ ಮಾಡುತ್ತಾಳೆ. ಈ ವಾಕ್ಯದಲ್ಲಿರುವ ಗುಣವಾಚಕ ಪದ
    ಅದ್ಭುತ
  • ಬರ್ತಾನೆ ಈ ಪದದ ಗ್ರಾಂಥಿಕ ರೂಪ ಪದ_____
    ಬರುತ್ತಾನೆ
  • ಇಂಗುಗುಂಡಿಯ ಪ್ರಯೋಜನಗಳೇನು?
    ಮಳೆಯ ನೀರನ್ನು ಇಂಗಿಸಬಹುದು. ಅಂತರ್ಜಲವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಮಣ್ಣಿನ ಸವಕಳಿಯನ್ನು ತಪ್ಪಿಸಬಹುದು.
  • ನೆಲದ ಮೇಲೆ ________________ ಅಡ್ಡವಾಯಿತು.
    ಗುಡ್ಡಬೆಟ್ಟ
  • ಬಿಸಿಲ ಝಳಕೆ ನೀರು ಏನಾಯಿತು?
    ಬಿಸಿಲ ಝಳಕೆ ಕಡಲ ನೀರು ಆವಿಯಾಯಿತು.
  • ಹಕ್ಕಿಗಳು ಆಕಾಶದಲ್ಲಿ ಪಟಪಟನೆ ಹಾರಿದವು ಈ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ
    ಪಟಪಟ
  • ಹೋರಾಡು ಕನ್ನಡಕೆ ________________ ರನ್ನಾ
    ಕಲಿಯಾಗಿ
  • ತಂದೆ ಪದದ ಸ್ತ್ರೀಲಿಂಗ ರೂಪ
    ತಾಯಿ
  • ಅಜ್ಜಿಯ ತೋಟದಲ್ಲಿ ಯಾವ ಯಾವ ಗಿಡಗಳಿದ್ದವು?
    ಅಜ್ಜಿಯ ತೋಟದಲ್ಲಿ ಅಡಿಕೆ, ತೆಂಗು, ಕಾಳು ಮೆಣಸು, ಕಾಫಿ, ಏಲಕ್ಕಿ ಮುಂತಾದ ಗಿಡಗಳಿದ್ದವು.
  • ಶಿವಾಜಿಯ ತಂದೆಯ ಹೆಸರೇನು?
    ಶಿವಾಜಿಯ ತಂದೆಯ ಹೆಸರು ಷಾಹಜಿ
  • ಕೊಂಡಾಣು ದುರ್ಗವು ಯಾರ ವಶದಲ್ಲಿತ್ತು?
    ಕೊಂಡಾಣು ದುರ್ಗವು ಮೊಘಲರ ವಶದಲ್ಲಿತ್ತು
  • ತಾಳಿದವರು ___________________
    ಬಾಳಿಯಾರು
  • ಮಳೆ ಪದ್ಯ ಬರೆದ ಕವಿ
    ಪಳಕಳ ಸೀತಾರಾಮಭಟ್ಟ
  • ಕಲ್ಲು ಕೊಟ್ಟಮ್ಮನನ್ನು ಏನೆಂದು ಹರಸುವಳು?
    ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ, ಪಲ್ಲಕ್ಕಿ ಮೇಲೆ ಮಗಬರುವಂತಾಗಲಿ ಮತ್ತು ಆ ಮನೆಗೆ ಮಲ್ಲಿಗೆ ಮುಡಿಯೋ ಸೊಸೆ ಬರಲಿ ಎಂದು ಹರಸುವಳು.
  • "ಮಾತಾಜಿಯವರಿಗೆ ಪ್ರಣಾಮಗಳು" ಯಾರು, ಯಾರಿಗೆ ಹೇಳಿದರು?
    ಈ ವಾಕ್ಯವನ್ನು ವೀರಮಾತೆ ಜೀಜಾಬಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ವೀರ ಬಾಲಕ ತನ್ನ ತಾಯಿಗೆ ಹೇಳಿದನು.
  • ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ?
    ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ತಂದೆತಾಯಿಯನ್ನು ನೆನೆಯುತ್ತಾರೆ.
  • ಹಾವು ಸರಸರನೆ ಹರಿದು ಹೋಯಿತು. ಈ ವಾಕ್ಯದಲ್ಲಿರುವ ಅನುಕರಣಾವ್ಯಯ
    ಸರಸರ
  • ಬಂದಾಗ ಈ ಪದವನ್ನು ಬಿಡಿಸಿ ಬರೆದಾಗ
    ಬಂದು + ಆಗ
  • ಕೈ ಕೆಸರಾದರೆ
    ಬಾಯಿ ಮೊಸರು
  • "ನೀನು ಗೆದ್ದು ಬಹುಮಾನವಾಗಿ ಕೊಡಬೇಕು" ಯಾರು, ಯಾರಿಗೆ ಹೇಳಿದರು?
    ಈ ವಾಕ್ಯವನ್ನು ವೀರಮಾತೆ ಜೀಜಾಬಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ತಾಯಿ ತನ್ನ ಮಗನಿಗೆ ಕೇಳೀದರು.
  • ’ಕಸ’ ಈ ಪದದ ಜೋಡುನುಡಿ____________
    ಕಡ್ಡಿ
  • ’ಮಗು’ ಈ ಪದದ ಬಹುವಚನೆ ರೂಪ
    ಮಕ್ಕಳು
  • ರಾಜು ಒಬ್ಬ ಸೃಜನಶೀಲ ವಿದ್ಯಾರ್ಥಿ ವಾಕ್ಯದಲ್ಲಿರುವ ಗುಣವಾಚಕ ಪದ ______________
    ಸೃಜನಶೀಲ
  • ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು?
    ಕನ್ನಡದ ಕಂದ ಕನ್ನಡಕ್ಕಾಗಿ ಹೋರಾಡಬೇಕು.
  • ’ಶಿಕ್ಷಕ’ ಈ ಪದದ ಸ್ತ್ರೀಲಿಂಗ ರೂಪ
    ಶಿಕ್ಷಕಿ
  • ಮುಕುಟ ಈ ಪದದ ಅರ್ಥ_____________
    ಕಿರೀಟ