ವಿದ್ಯಾರ್ಥಿಗಳು ಓದಿದ ನಂತರ ಬರೆದು ಬರೆದು ಅಭ್ಯಾಸ ಮಾಡಬೇಕು. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದವನ್ನು ಗುರುತಿಸಿ.
ಬರೆದು ಬರೆದು
ಸಿಂಹವು ಅಡವಿಯಲಿರುವ _______________ ಕರೆಯಿಸಿತು.
ವೈದ್ಯರನ್ನು
ಸೂಚನೆಗಳನ್ನು ಒಳಗೊಂಡ ಫಲಕಗಳನ್ನು __________ ಎಂದು ಕರೆಯುತ್ತಾರೆ.
ಸೂಚನಾ ಫಲಕಗಳು
ಗವಾಯಿಯವರು ಏನನ್ನು ಕಟ್ಟಿ ಬೆಳೆಸಿದರು?
ಗವಾಯಿಯವರು ಸ್ವರಲೋಕವನ್ನು ಕಟ್ಟಿ ಬೆಳೆಸಿದರು
ಸಳನಿಗೆ ಹೊಯ್ಸಳ ಎಂದು ಯಾರು ಹೇಳಿದರು?
ಸಳನಿಗೆ ಹೊಯ್ಸಳ ಎಂದು ಜೈನ ಗುರುಗಳು ಹೇಳಿದರು.
ಭಾರ ಈ ಪದದ ಪ್ರಾಸ ಪದ
ವಾರ
ಗವಾಯಿಯವರು ಯಾರ ಬಾಳಿನ ಚಂದಿರ?
ಗವಾಯಿಯವರು ಅಂಧರ ಬಾಳಿನ ಚಂದಿರ
ರಾಜ ಪಾಠಪುಸ್ತಕ ತೆಗೆದು ಏನು ಮಾಡಬೇಕು?
ರಾಜ ಪಾಠಪುಸ್ತಕ ತೆಗೆದು ಅಭ್ಯಾಸ ಮಾಡಬೇಕು.
ಋಷಿಗಳು ಭಗೀರಥನಿಗೆ ಏನೆಂದು ಹೇಳಿದನು?
ಋಷಿಗಳು ಭಗೀರಥನಿಗೆ ದೇವಲೋಕದ ಗಂಗೆಯನ್ನು ಭೂಮಿಗೆ ತಂದು ತಾತಂದಿರ ಬೂದಿಯ ಮೇಲೆ ಹರಿಸಬೇಕೆಂದು ಹೇಳಿದರು.
ಜಾಗರೂಕ ಈ ಪದದ ವಿರುದ್ಧ ಪದ___________
ಅಜಾಗರೂಕ
ಗಂಗೆ ಹರಿಯುವ ರಭಸವನ್ನು ತಡೆದವರು ಯಾರು?
ಗಂಗೆ ಹರಿಯುವ ರಭಸವನ್ನು ತಡೆದವರು ಶಿವ
ಕೆಲಸ + ಅನ್ನು = ______________ ಈ ಪದಗಳನ್ನು ಕೂಡಿಸಿ ಬರೆದಾಗ
ಕೆಲಸವನ್ನು
ಸ್ವಪ್ನ ಈ ಪದದ ಅರ್ಥ _____________
ಕನಸು
ರಸ್ತೆಯ ಬದಿಯಲ್ಲಿ ದೊಡ್ಡ ದೊಡ್ಡ ಮರಗಳಿವೆ. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದವನ್ನು ಗುರುತಿಸಿ.
ದೊಡ್ಡ ದೊಡ್ಡ
ಮಣಿಸು ಈ ಪದದ ಅರ್ಥ ಏನು?
ಸೋಲಿಸು
" ಈ ವೀರನನ್ನು ನೀವು ನಿಮ್ಮ ದೊರೆಯನ್ನಾಗಿ ಮಾಡಿಕೊಳ್ಳಿ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಈ ಮೇಲಿನ ವಾಕ್ಯವನ್ನು ಹೊಯ್ಸಳ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಜೈನ ಗುರುಗಳು ಊರಿನ ಜನರಿಗೆ ಹೇಳಿದರು.
ಮೋಡ + ಅನ್ನು ________________ಈ ಪದಗಳನ್ನು ಕೂಡಿಸಿ ಬರೆದಾಗ
ಮೋಡವನ್ನು
ಮಗು ಈ ಪದದ ಬಹುವಚನ ರೂಪ _____________
ಮಕ್ಕಳು
ಬಾಲಕ ಈ ಪದದ ಅನ್ಯಲಿಂಗ ರೂಪ____________
ಬಾಲಕಿ
ಹೊಯ್ಸಳರಿಂದ ನಿರ್ಮಾಣಗೊಂಡ ದೇವಾಲಯಗಳಾವುವು?
ಬೇಲೂರು, ಹಳೇಬೀಡು, ಸೋಮನಾಥಪುರದಲ್ಲಿನ ದೇವಾಲಯಗಳು ಹೊಯ್ಸಳರಿಂದ ನಿರ್ಮಾಣಗೊಂಡ ದೇವಾಲಯಗಳಾಗಿವೆ.
ಅಂಗಡಿ ಎಂಬ ಹಳ್ಳಿ ಎಲ್ಲಿದೆ?
ಅಂಗಡಿ ಎಂಬ ಹಲ್ಲಿ ಮೂಡಿಗೆರೆ ತಾಲೂಕಿನಲ್ಲಿದೆ.
ಮಕ್ಕಳೇ ನಡೆಯುವಾಗ ಪಾದಾಚಾರಿಗಳ ರಸ್ತೆಯಲ್ಲಿಯೇ ನಡೆಯಿರಿ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಈ ವಾಕ್ಯವನ್ನು ಮೃಗಾಲಯದಲ್ಲಿ ಒಂದು ದಿನ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಶಿಕ್ಷಕರು ಮಕ್ಕಳಿಗೆ ಹೇಳಿದರು.
ಶಾಲೆಗೆ ಯಾವ ದಿನ ರಜಾ ಇದೆ?
ಶಾಲೆಗೆ ಭಾನುವಾರದ ದಿನ ರಜಾ ಇದೆ.
ಜಾಣ ವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು?
ಜಾಣ ವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಶೀತದಿ ಮೂಗು ಕಟ್ಟಿದೆ ಒಡೆಯ ವಾಸನೆ ಏನು ತಿಳಿಯದು ನಿನಗೆ ಎಂದು ಹೇಳಿತು.
ಭಿತ್ತಿ ಪತ್ರದ ಕುರಿತು ಬರೆಯಿರಿ.
ಭಿತ್ತಿ ಅಂದರೆ ಗೋಡೆ ಗೋಡೆಗೆ ಅಂಟಿಸುವ ಪತ್ರಗಳೇ ಭಿತ್ತಿ ಪತ್ರಗಳು , ಅವು ದೊಡ್ಡದಾಗಿದ್ದು ಸಂದೇಶವನ್ನು ಸ್ಪಷ್ಟವಾಗಿ ಹಾಗೂ ಆಕರ್ಷಕವಾಗಿ ನಮಗೆ ತಿಳಿಸುತ್ತವೆ . ಅಲ್ಲದೇ ಕೆಲವೊಂದು ಭಿತ್ತಿಪತ್ರ
"ಗಂಗೆಯನ್ನು ನಾನು ಶಿರದಲ್ಲಿ ಧರಿಸುತ್ತೇನೆ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಈ ಮೇಲಿನ ವಾಕ್ಯವನ್ನು ಭಗೀರಥ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ ಈ ಮಾತನ್ನು ಶಿವ ಭಗೀರಥನಿಗೆ ಕೇಳಿದನು.
ಬರೆದರು ನಾಟಕ ಪುರಾಣ ಚರಿತೆ ಅಳೆಯಲಿಕ್ಕಾಗದು ______________
ಪಾಂಡಿತ್ಯ
ಒಳಗೆ ಈ ಪದದ ವಿರುದ್ಧ ಪದ___________
ಹೊರಗೆ
ಮನೆ + ಒಳಗೆ = ______________ ಈ ಪದಗಳನ್ನು ಕೂಡಿಸಿ ಬರೆದಾಗ
ಮನೆಯೊಳಗೆ
ಪರಿಮಳ ಈ ಪದದ ಅರ್ಥ
ಸುವಾಸನೆ
’ಅನಾರೋಗ್ಯದ ಸಿಂಹ’ ಪದ್ಯದ ನೀತಿ ಏನು?
ಅನಾರೋಗ್ಯದ ಸಿಂಹ’ ಪದ್ಯದ ನೀತಿ "ಉಪಾಯ ಬಲ್ಲವನಿಗೆ ಅಪಾಯವಿಲ್ಲ"
ಕನಸು ಈ ಪದದ ಪ್ರಾಸ ಪದ
ಮನಸು
Your experience on this site will be improved by allowing cookies.