Study

೩ ನೇ ತರಗತಿ

  •   0%
  •  0     0     0

  • ಹುಡುಗಿಯರು ಈ ಪದದ ಏಕವಚನ ರೂಪ ___________
    ಹುಡುಗಿ
  • ವಿದ್ಯಾರ್ಥಿಗಳು ಓದಿದ ನಂತರ ಬರೆದು ಬರೆದು ಅಭ್ಯಾಸ ಮಾಡಬೇಕು. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದವನ್ನು ಗುರುತಿಸಿ.
    ಬರೆದು ಬರೆದು
  • ಸಿಂಹವು ಅಡವಿಯಲಿರುವ _______________ ಕರೆಯಿಸಿತು.
    ವೈದ್ಯರನ್ನು
  • ಸೂಚನೆಗಳನ್ನು ಒಳಗೊಂಡ ಫಲಕಗಳನ್ನು __________ ಎಂದು ಕರೆಯುತ್ತಾರೆ.
    ಸೂಚನಾ ಫಲಕಗಳು
  • ಗವಾಯಿಯವರು ಏನನ್ನು ಕಟ್ಟಿ ಬೆಳೆಸಿದರು?
    ಗವಾಯಿಯವರು ಸ್ವರಲೋಕವನ್ನು ಕಟ್ಟಿ ಬೆಳೆಸಿದರು
  • ಸಳನಿಗೆ ಹೊಯ್ಸಳ ಎಂದು ಯಾರು ಹೇಳಿದರು?
    ಸಳನಿಗೆ ಹೊಯ್ಸಳ ಎಂದು ಜೈನ ಗುರುಗಳು ಹೇಳಿದರು.
  • ಭಾರ ಈ ಪದದ ಪ್ರಾಸ ಪದ
    ವಾರ
  • ಗವಾಯಿಯವರು ಯಾರ ಬಾಳಿನ ಚಂದಿರ?
    ಗವಾಯಿಯವರು ಅಂಧರ ಬಾಳಿನ ಚಂದಿರ
  • ರಾಜ ಪಾಠಪುಸ್ತಕ ತೆಗೆದು ಏನು ಮಾಡಬೇಕು?
    ರಾಜ ಪಾಠಪುಸ್ತಕ ತೆಗೆದು ಅಭ್ಯಾಸ ಮಾಡಬೇಕು.
  • ಋಷಿಗಳು ಭಗೀರಥನಿಗೆ ಏನೆಂದು ಹೇಳಿದನು?
    ಋಷಿಗಳು ಭಗೀರಥನಿಗೆ ದೇವಲೋಕದ ಗಂಗೆಯನ್ನು ಭೂಮಿಗೆ ತಂದು ತಾತಂದಿರ ಬೂದಿಯ ಮೇಲೆ ಹರಿಸಬೇಕೆಂದು ಹೇಳಿದರು.
  • ಜಾಗರೂಕ ಈ ಪದದ ವಿರುದ್ಧ ಪದ___________
    ಅಜಾಗರೂಕ
  • ಗಂಗೆ ಹರಿಯುವ ರಭಸವನ್ನು ತಡೆದವರು ಯಾರು?
    ಗಂಗೆ ಹರಿಯುವ ರಭಸವನ್ನು ತಡೆದವರು ಶಿವ
  • ಕೆಲಸ + ಅನ್ನು = ______________ ಈ ಪದಗಳನ್ನು ಕೂಡಿಸಿ ಬರೆದಾಗ
    ಕೆಲಸವನ್ನು
  • ಸ್ವಪ್ನ ಈ ಪದದ ಅರ್ಥ _____________
    ಕನಸು
  • ರಸ್ತೆಯ ಬದಿಯಲ್ಲಿ ದೊಡ್ಡ ದೊಡ್ಡ ಮರಗಳಿವೆ. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದವನ್ನು ಗುರುತಿಸಿ.
    ದೊಡ್ಡ ದೊಡ್ಡ
  • ಮಣಿಸು ಈ ಪದದ ಅರ್ಥ ಏನು?
    ಸೋಲಿಸು
  • " ಈ ವೀರನನ್ನು ನೀವು ನಿಮ್ಮ ದೊರೆಯನ್ನಾಗಿ ಮಾಡಿಕೊಳ್ಳಿ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
    ಈ ಮೇಲಿನ ವಾಕ್ಯವನ್ನು ಹೊಯ್ಸಳ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಜೈನ ಗುರುಗಳು ಊರಿನ ಜನರಿಗೆ ಹೇಳಿದರು.
  • ಮೋಡ + ಅನ್ನು ________________ಈ ಪದಗಳನ್ನು ಕೂಡಿಸಿ ಬರೆದಾಗ
    ಮೋಡವನ್ನು
  • ಮಗು ಈ ಪದದ ಬಹುವಚನ ರೂಪ _____________
    ಮಕ್ಕಳು
  • ಬಾಲಕ ಈ ಪದದ ಅನ್ಯಲಿಂಗ ರೂಪ____________
    ಬಾಲಕಿ
  • ಹೊಯ್ಸಳರಿಂದ ನಿರ್ಮಾಣಗೊಂಡ ದೇವಾಲಯಗಳಾವುವು?
    ಬೇಲೂರು, ಹಳೇಬೀಡು, ಸೋಮನಾಥಪುರದಲ್ಲಿನ ದೇವಾಲಯಗಳು ಹೊಯ್ಸಳರಿಂದ ನಿರ್ಮಾಣಗೊಂಡ ದೇವಾಲಯಗಳಾಗಿವೆ.
  • ಅಂಗಡಿ ಎಂಬ ಹಳ್ಳಿ ಎಲ್ಲಿದೆ?
    ಅಂಗಡಿ ಎಂಬ ಹಲ್ಲಿ ಮೂಡಿಗೆರೆ ತಾಲೂಕಿನಲ್ಲಿದೆ.
  • ಮಕ್ಕಳೇ ನಡೆಯುವಾಗ ಪಾದಾಚಾರಿಗಳ ರಸ್ತೆಯಲ್ಲಿಯೇ ನಡೆಯಿರಿ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
    ಈ ವಾಕ್ಯವನ್ನು ಮೃಗಾಲಯದಲ್ಲಿ ಒಂದು ದಿನ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಶಿಕ್ಷಕರು ಮಕ್ಕಳಿಗೆ ಹೇಳಿದರು.
  • ಶಾಲೆಗೆ ಯಾವ ದಿನ ರಜಾ ಇದೆ?
    ಶಾಲೆಗೆ ಭಾನುವಾರದ ದಿನ ರಜಾ ಇದೆ.
  • ಜಾಣ ವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು?
    ಜಾಣ ವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಶೀತದಿ ಮೂಗು ಕಟ್ಟಿದೆ ಒಡೆಯ ವಾಸನೆ ಏನು ತಿಳಿಯದು ನಿನಗೆ ಎಂದು ಹೇಳಿತು.
  • ಭಿತ್ತಿ ಪತ್ರದ ಕುರಿತು ಬರೆಯಿರಿ.
    ಭಿತ್ತಿ ಅಂದರೆ ಗೋಡೆ ಗೋಡೆಗೆ ಅಂಟಿಸುವ ಪತ್ರಗಳೇ ಭಿತ್ತಿ ಪತ್ರಗಳು , ಅವು ದೊಡ್ಡದಾಗಿದ್ದು ಸಂದೇಶವನ್ನು ಸ್ಪಷ್ಟವಾಗಿ ಹಾಗೂ ಆಕರ್ಷಕವಾಗಿ ನಮಗೆ ತಿಳಿಸುತ್ತವೆ . ಅಲ್ಲದೇ ಕೆಲವೊಂದು ಭಿತ್ತಿಪತ್ರ
  • "ಗಂಗೆಯನ್ನು ನಾನು ಶಿರದಲ್ಲಿ ಧರಿಸುತ್ತೇನೆ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
    ಈ ಮೇಲಿನ ವಾಕ್ಯವನ್ನು ಭಗೀರಥ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ ಈ ಮಾತನ್ನು ಶಿವ ಭಗೀರಥನಿಗೆ ಕೇಳಿದನು.
  • ಬರೆದರು ನಾಟಕ ಪುರಾಣ ಚರಿತೆ ಅಳೆಯಲಿಕ್ಕಾಗದು ______________
    ಪಾಂಡಿತ್ಯ
  • ಒಳಗೆ ಈ ಪದದ ವಿರುದ್ಧ ಪದ___________
    ಹೊರಗೆ
  • ಮನೆ + ಒಳಗೆ = ______________ ಈ ಪದಗಳನ್ನು ಕೂಡಿಸಿ ಬರೆದಾಗ
    ಮನೆಯೊಳಗೆ
  • ಪರಿಮಳ ಈ ಪದದ ಅರ್ಥ
    ಸುವಾಸನೆ
  • ’ಅನಾರೋಗ್ಯದ ಸಿಂಹ’ ಪದ್ಯದ ನೀತಿ ಏನು?
    ಅನಾರೋಗ್ಯದ ಸಿಂಹ’ ಪದ್ಯದ ನೀತಿ "ಉಪಾಯ ಬಲ್ಲವನಿಗೆ ಅಪಾಯವಿಲ್ಲ"
  • ಕನಸು ಈ ಪದದ ಪ್ರಾಸ ಪದ
    ಮನಸು